ಸಾಗರದಾಚೆಯ ವನದಲಿ ಅರಳಿಹ
ಹೂವಿನ ತೆರದಲಿ ನೀನಿರುವೆ ಮುದುಡಿದ ಮನದಲಿ
ಹೂವನು ಮುಡಿಯಲು
ಕಾತರದಿಂದಲಿ ನಾನಿರುವೆ ..
ತೆರೆಗಳ ತೆರ ಬರುತಿಹ ಆಸೆಗಳ
ಕಡಿವಾಣಕೆ ಮನ ಮೌನ
ಸಾಗರದಲೆಗಳ ದಾಟಿಸಿ ನಡೆದರೆ
ಬರುವುದುಹೊಸ ಋತು ಗಾನ
ಎಲ್ಲೋ ಅಡಗಿಹ ಕನಸು ಕಲ್ಪನೆಯ
ಪಥವದು ನೆನಪಿನ ಹಾದಿ
ಜಟಿಲಸಮಸ್ಯೆಯು ಜೀವನವೆಂಬ
ಸಾಗರ ಈಜುವ ಹಾದಿ
-ಮಧುಸೂದನ. ಭಟ್.
ಚೆನ್ನಾಗಿದೆ ಹೋಲಿಕೆ....ಬೇಗ ಸಾಗರದಾಚೆಯ ದಡ ಸೇರಿ ಆ ಕುಸುಮವನ್ನು ಮುಡಿಗೇರಿಸಿಕೊಂಡು ಕುಸುಮಾಧರರಾಗಿರಿ.......ನಿಮ್ಮ ದಾರಿಯ ತುಂಬ ಕುಸುಮಗಳೇ ಚೆಲ್ಲಿರಲಿ..
ReplyDelete